ಭವಿಷ್ಯದ ಕ್ರಾಂತಿಕಾರದ ಔಷಧಿಗಳು

ಮಾನವನ ವಂಶವಾಹಿನಿಯಲ್ಲಿರುವ ಸುಮಾರು 3 ಬಿಲಿಯನ್ D.N.A. ಗಳಲ್ಲಿ ಶೇ.25 ರಷ್ಟು ವ್ಯಾಧಿಕಾರಕವೆ೦ದು ಗುರುತಿಸಲಾಗಿದೆ.. ಇದನ್ನೇ ಆಧಾರವಾಗಿಟ್ಟುಕೊ೦ಡು ಆಯಾ ವ೦ಶವಾಹಿನಿಗಳು ಉಂಟುಮಾಡುವ ರೋಗಗಳನ್ನು ತಡೆಗಟ್ಟಲು ಸಮರ್ಥವಾದ ಔಷಧಿಗಳನ್ನು ವಿಜ್ಞಾನಿಗಳು ಕಂಡುಹಿಡಿಯಲಿದ್ದಾರೆ. ಇದರಿ೦ದ ರೋಗಿಯ ‘ಬಯೋಕೆಮಿಸ್ಟ್ರಿ’ ತಿಳಿದುಕೊಳ್ಳಲು ಅನುಕೂಲವಾಗುತ್ತದೆ. ಚುಚ್ಚುಮದ್ದಿನ ಪ್ರಾಮುಖ್ಯತೆ ಕಡಿಮೆಯಾಗುತ್ತದೆ. ಅಸ್ತಮಾಗೆ ಉಪಯೋಗಿಸುವ ‘ಇನ್‌ಹೇಲರ್’ ಗಳಂತೆ ಉಸಿರಿನೊಂದಿಗೆ ಎಳೆದುಕೊಳ್ಳುವ ರೂಪದಲ್ಲಿ ಹಲವಾರು ಔಷಧಿಗಳು ಮಾರುಕಟ್ಟೆಗೆ ಬರಲಿದೆ. ನಾವು ಪ್ರತಿದಿನ ತಿನ್ನುವ ಆಹಾರದೂ೦ದಿಗೆ ದೇಹದೊಳಗೆ ಸೇರುವ ಔಷಧಿಗಳು ನಿರ್ದಿಷ್ಟ ಸಮಯದಲ್ಲಿ ಮಾತ್ರ ಕೆಲಸ ಮಾಡುವ ಮಾತ್ರೆಗಳು ಬರುತ್ತವೆ. ಗಂಭೀರ ಆಹಾರ ಸಮಸ್ಯೆಗಳಿಂದ ಬಳಲುತ್ತಿರುವವರಿಗೆ ಸುಲಭವಾಗಿ ಉಪಯೋಗಿಸಲು ಮತ್ತು ಶೀಘ್ರ ಉಪಶಮನವನ್ನು ನೀಡುವ ಔಷಧಿಗಳು ಅಂಗಡಿಗಳಿಗೆ ಬರಲಿದೆ. ಮುಖ್ಯವಾಗಿ ಟಿ.ಬಿ., ಏಡ್ಸ್‌ನಂತಹ ಭಯ೦ಕರ ವ್ಯಾಧಿಗಳಿಗೂ ಕೂಡ ದಿನಕ್ಕೊಂದು ಮಾತ್ರೆ ಸಾಕು, ಎಂಬ ಕಾಲ ಬರಲಿದೆ.

ಕೆಲವು ಔಷಧಿಗಳು ಬಕ್ಕತಲೆಯ ಮೇಲೆ ಕೂದಲು ಬೆಳೆಸಲು ಉಪಯೋಗವಾದರೆ, ಕೂದಲು ಉದುರುವುದನ್ನು ತಡೆಗಟ್ಟುವಂಥಹ ಔಷಧಿಗಳನ್ನು ಚಿಕಾಗೋ ವಿಶ್ವವಿದ್ಯಾನಿಲಯದ ಸ೦ಶೋಧನಾವೃಂದವು ವಿಧಾನವನ್ನು (ಹೊಸ) ಕಂಡುಹಿಡಿದಿದೆ. ಪೆನ್ಸಿಲ್ವೇನಿಯಾ ವಿಶ್ವವಿದ್ಯಾನಿಲಯಕ್ಕೆ ಸೇರಿದ ಹೆಚ್.ಲೀ. ಸ್ಟೀನಿ ಎ೦ಬ ವಿಜ್ಞಾನಿ ಕಾಸ್ಮೆಟಿಕ್‌ಡ್ರಗ್ ಅನ್ನು ಕಂಡು ಹಿಡಿದಿದ್ದಾರೆ. ಇವರು ಕೂದಲು ಬೆಳೆಸಲು ಮತ್ತು ಜ್ಞಾಪಕಶಕ್ತಿಯನ್ನು, ಬುದ್ಧಿವಂತಿಕೆಯನ್ನು ಹೆಚ್ಚಿಸಲು  ಕೂಡ ಔಷಧಿಯನ್ನು ಕಂಡುಹಿಡಿಯುತ್ತಲಿದ್ದಾರೆ. ಇತ್ತೀಚೆಗೆ ವಿಜ್ಞಾನಿಗಳು ಉದ್ರೇಕ, ಮಾನಸಿಕ ಒತ್ತಡಗಳಿಗೆ ಕಾರಣವಾದ ವ೦ಶವಾಹಿನಿಯನ್ನು ಗುರುತಿಸಿದ್ದಾರೆ. ಮಧ್ಯಪಾನ, ಮಾದಕ ದ್ರವಗಳ ಚಟಕ್ಕೆ ಕಾರಣವಾಗುವ ವ೦ಶವಾಹಿನಿಯನ್ನು ಗುರುತಿಸಲಾಗಿದೆ.

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ನೀ ಸಿಗದೆ ಬಾಳೊಂದು ಬಾಳೆ?
Next post ಕಾಲಾಳುಗಳು ಕಲ್ಲಾಳಕ್ಕೆ

ಸಣ್ಣ ಕತೆ

  • ವ್ಯವಸ್ಥೆ

    ಮಗಳ ಮದುವೆ ಪಿಕ್ಸ್ ಆಗಿದ್ದರಿಂದ ದೊಡ್ಡ ತಲೆ ಭಾರ ಇಳಿದಂತಾಗಿತ್ತು. ಮದುವೆ ಮುಂದಿನ ತಿಂಗಳ ಕೊನೆಯ ವಾರವೆಂದು ದಿನಾಂಕವನ್ನೂ ನಿಗದಿಪಡಿಸಲಾಗಿತ್ತು. ಗಂಡಿನವರ ತರಾತುರಿಗೆ ಒಪ್ಪಲೇಬೇಕಾದ ಪರಿಸ್ಥಿತಿ ನನ್ನದು.… Read more…

  • ಉರಿವ ಮಹಡಿಯ ಒಳಗೆ

    ಸಹ ಉದ್ಯೋಗಿಗಳ ಓಡಾಟ, ಗ್ರಾಹಕರೊಂದಿಗಿನ ಮೊಬೈಲ್ ಹಾಗೂ ದೂರವಾಣಿ ಸಂಭಾಷಣೆಗಳು, ಲ್ಯಾಪ್‌ಟಾಪಿನ ಶಬ್ದಗಳು ಎಲ್ಲಾ ಸ್ತಬ್ದವಾದಾಗಲೇ ಮಧುಕರನಿಗೆ ಕಚೇರಿಯ ಸಮಯ ಮೀರಿದ್ದು ಅರಿವಾಯಿತು. ಕುಳಿತಲ್ಲಿಂದಲೇ ತನ್ನ ಕುತ್ತಿಗೆಯನ್ನು… Read more…

  • ಮಿಂಚು

    "ಸಾವಿತ್ರಿ, ಇದು ಏನು? ನನ್ನಾಣೆಯಾಗಿದೆ. ಹೀಗೆ ಮಾಡಬೇಡ! ಇದು ಒಳ್ಳೆಯದಲ್ಲ. ಬಿಡು, ಬಿಡು...! ನಾಲ್ಕು ಜನ ನೋಡಿದರೆ ಏನು ಅಂದಾರು?" ಅನ್ನಲಿ ಏನೇ ಅನ್ನಲಿ ನಾನು ಯಾವ… Read more…

  • ಅಜ್ಜಿಯ ಪ್ರೇಮ

    ಎರಡನೆಯ ಹೆರಿಗೆಯಲ್ಲಿ ಅಸು ನೀಗಿದ ಮಗಳು ಕಮಲಳನ್ನು ಕಳಕೊಂಡ ತೊಂಬತ್ತು ವರ್ಷದ ಜಯಮ್ಮನಿಗೆ ಸಹಿಸಲಾಗದ ಸಂಕಟವಾಗಿತ್ತು. ಹೆಣ್ಣು ಮಗುವಿಗೆ ಜನ್ಮವಿತ್ತು ತನ್ನ ಇಹದ ಯಾತ್ರೆಯನ್ನು ಮುಗಿಸಿ ಹೋದ… Read more…

  • ಮಂಜುಳ ಗಾನ

    ಶ್ರೀ ಸರಸ್ವತಿ ಕಾಲೇಜಿನ ಪಾಠಪ್ರವಚನಗಳ ಬಗ್ಗೆ ಎರಡನೆ ಮಾತಿಲ್ಲ. ಅತ್ಯಂತ ಉತ್ತಮ ಗುಣಮಟ್ಟದ ಶಿಕ್ಷಣ ವಿದ್ಯಾರ್ಥಿಗಳಿಗೆ ದೊರಕುತ್ತಿತ್ತು. ಆದರೆ ಈ ಕಾಲೇಜಿನ ವಿಶೇಷವೆಂದರೆ ವಿದ್ಯಾರ್ಥಿಗಳ ಮತ್ತು ಉಪನ್ಯಾಸಕರ… Read more…

cheap jordans|wholesale air max|wholesale jordans|wholesale jewelry|wholesale jerseys